HOT TOPICS
SPOTLIGHT AGENCIES
ಕನ್ನಡಿಗ ಮತ್ತು ಅಭಿಮಾನ - ವಿರುದ್ಧ ಪದಗಳೇ?
Written By shas3n - 7 August, 2007
Bangalore Hebbal Lake lakes Language and Culture
ಇತ್ತೀಚೆಗೆ ಹೆಬ್ಬಾಳ ಕೆರೆಯ ರಕ್ಷಣೆಯ ಬಗ್ಗೆ ಮೇಣದ ಬತ್ತಿ ಪ್ರತಿಭಟನೆ ನಡೆಸುವ ಬಗ್ಗೆ ಮಾತಾಡುತ್ತಿದ್ದೆವಲ್ಲ, ನೆನಪಿದೆಯೆ?
ಸಂಪದದ ಮುರಳಿಯವರು ಅಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಂತೆ. ಅವರಿಗೆ ಅಲ್ಲಿ ಸಾಕಷ್ಟು ಜನ ಸೇರಿದ್ದಕ್ಕೇನೋ ಸಂತೋಷವೇ ಆಗಿದೆ. 'ಪರವಾಗಿಲ್ವೇ ನಮ್ಮ್ ಊರಿನಲ್ಲಿ ನದಿ-ಕೆರೆ ಬಗ್ಗೆ ತಲೆ ಕೆಡಿಸಿಕೊಳ್ಳೋಕೂ ಸುಮಾರು ಜನ ಇದ್ದಾರಲ್ಲ' ಅಂತ. ಆದರೆ ಅವ್ರು ಹೇಳೊ ಪ್ರಕಾರ ಕನ್ನಡದ ಜನ ಯಾರೂ ಕಾಣಿಸ್ತಾನೆ ಇರಲಿಲ್ಲ, ಕಾರ್ಯಕ್ರಮದ ಕಲಾಪಗಳೆಲ್ಲಾ ಇಂಗ್ಲೀಷು ಹಿಂದಿಯಲ್ಲೇ ನಡೆಯುತ್ತಿದ್ದವಂತೆ.
ಬೇರೆ ಊರಿನವರು ಬಂದು ನಮ್ಮ ಕೆರೆಮೇಲೆ ಪ್ರೀತಿ ತೋರಿಸಿದರೆ ನಮಗೆಲ್ಲ ನಿಜಕ್ಕೂ ಇಷ್ಟಾನೆ! ಆದ್ರೆ ಬೆಂಗಳೂರಿನ 'ಉಟ್ಟು ವೋರಾಟಗಾರ'ರೆಲ್ಲಾ ಎಲ್ಲಿ ಹೋಗಿದ್ದರು ಅಂತ.
ಆವ್ರೆ ಹೇಳೋಹಾಗೆ 'ಕನ್ನಡ ಮಾತಾಡುವವರಿಗೆ ಆಸಕ್ತಿ ಇದ್ದಿದ್ದರೆ ನಮ್ಮ ಕೆರೆಗಳು ಈ ಮಟ್ಟಕ್ಕೆ ಬರ್ತಾಯಿತ್ತಾ ' ?
COMMENTS


ರಾಮಾಯಣಕ್ಕೂ ಇಮಾಮ್ ಸಾಬೀಗೂ ಏನು ಸಂಬಂಧ?
December Stud - 9 August, 2007 - 18:39
ಭಾಷೆ ಹಾಗೂ ಪರಿಸರ ಕಾಳಜಿಯ ನಡುವೆ ಕೊಂಡಿ ಹಾಕುವ ಅವಶ್ಯಕತೆಯೂ ಇಲ್ಲ, ಅದು ಸರಿಯೂ ಅಲ್ಲ. ಎರಡೂ ವಿಷಯಗಳನ್ನೂ ಬೇರೆ ಬೇರೆ ತಕ್ಕಡಿಗಳಲ್ಲಿ ತೂಗುವುದೇ ಸೂಕ್ತ.
ಅಂದ ಹಾಗೆ, ನಮ್ಮ ಕನ್ನಡ ಮೇಷ್ಟರೊಬ್ಬರು ಹೇಳ್ತಾ ಇದ್ದರು:
ತಮಿಳರು ದುರಭಿಮಾನಿಗಳು, ತೆಲುಗರು ಸ್ವಾಭಿಮಾನಿಗಳು, ಕನ್ನಡಿಗರು ನಿರಭಿಮಾನಿಗಳು ಅಂತ. ಕೇಳಿ ನಗುವುದಕ್ಕೆ ಚೆನ್ನಾಗಿದೆ. ಆದರ ಪರಿಸ್ಥಿತಿಯ ಒತ್ತಡ ಅರಿವಾದಾಗ, ಅಲ್ಲೋಲಕಲ್ಲೋಲವಾಗುವುದು ಸಹಜವೇ.
PRAJA.IN COMMENT GUIDELINES
Posting Guidelines apply for comments as well. No foul language, hate mongering or personal attacks. If criticizing third person or an authority, you must be fact based, as constructive as possible, and use gentle words. Avoid going off-topic no matter how nice your comment is. Moderators reserve the right to either edit or simply delete comments that don't meet these guidelines. If you are nice enough to realize you violated the guidelines, please save Moderators some time by editing and fixing yourself. Thanks!